Fear of losing the dearest one

11:35 AM

Fear of losing the dearest one

When Life Took a Crucial Turn

When life had reached its hardest phase,

The mother of all testing days,

As if my soul was set to flee-

You made the choice seem light for me.

To chase my dreams or stay a friend,

You helped me weigh what fate might send.

When I climbed life’s daunting hill,

With weary heart, yet iron will,

And when I thought I’d had enough,


ಮರೆಯಾಗದಿರಲಿ ಅವನ ನೆನಪು

2:36 AM

ಮರೆಯಾಗದಿರಲಿ ಅವನ ನೆನಪು

 ಏಕಾಂತದಲ್ಲೂ  ನಿನ್ನ  ಗುರುತಿದೆ, 

ಮರೆಯಾದರೂ  ನಿನ್ನ  ನೆನಪಿದೆ. 

ಉಸಿರಲ್ಲೂ  ಸೋಕಿರೋ  ಗಾಳಿಯಲ್ಲಿ 

ನಿನ್ನ  ಹೆಸರಿದೆ. 

ಹೇಗೆ  ಕಳುಹಿಸಲಿ  

ನನ್ನ  ಮನದಾಳದ  ಮಾತುಗಳನ್ನು,

ಎಲ್ಲಿ  ಕಳುಹಿಸಲಿ  

ನನ್ನ  ಪ್ರೇಮದ  ಸಂದೇಶವನ್ನು ?

ಕಾಣದ  ಊರಿಗೆ  ಹೋಗಿರೋ  ನಿನಗೆ, 

ಕರೆದು  ಹೋಗಿರೋ  ಯಮನಿಗೆ ,

ಮರಣದ  ತೇರಲಿ  ನನ್ನ 

ಎಳೆದು  ಹೋಗಲು  ಭಯವೇಕೆ  ?

ಧರ್ಮದ  ಹೆಸರಲಿ  ದ್ವೇಷವ  ಬಿತ್ತುವ 

ಕ್ರೂರಿಗಳಿಗೆ  ಹೇಗೆ  ಹೇಳಲಿ ?

ದಯೆಯೇ   ಧರ್ಮದ  ಮೂಲ,  

ಪ್ರೀತಿಯೇ  ಮನುಕೂಲದ  ಧ್ಯೇಯ .

ಬಂದೂಕುಗಳಿಗೆ  ಸೂತ್ರಧಾರರಾದ 

ನೆರೆಹೊರೆಯರಿಗೆ  ಹೇಗೆ  ಹೇಳಲಿ ?

ನಿಮ್ಮ  ಮೆನೆಗೆ  ಬೆಂಕಿ  


Take me back

10:07 AM

Take me back

 Take me back

to the moments etched in beauty,

to a day filled with love,

where I asked for nothing in return.

Carry me to the time

when our eyes first met,

when love bloomed in a glance,

though I barely knew you.

As days went by,

my thoughts circled around you.

your joys, your quirks,

what made your heart lighter.

And as time passed,

I found myself lost in love.


ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ

9:38 AM

ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ

ನಾನು ದಿನಾಲೂ ಓದುವ 

ಓಂ ಕಾಲಾತೀತಾಯ ನಮಃ ॥ 10 ॥

ಓಂ ಭಕ್ತಾವನಪ್ರತಿಜ್ಞಾಯ ನಮಃ ॥ 20 ॥

ಓಂ ಪ್ರಿಯಾಯ ನಮಃ ॥ 30 ॥

ಓಂ ಜಗತಃಪಿತ್ರೇ ನಮಃ ॥ 40 ॥

ಓಂ ಹೃದಯಗ್ರಂಥಿಭೇದಕಾಯ ನಮಃ ॥ 50 ॥

ಓಂ ಅಶಕ್ಯರಹಿತಾಯ ನಮಃ ॥ 60 ॥

ಓಂ ಪ್ರೇಮಮೂರ್ತಯೇ ನಮಃ ॥ 70 ॥

ಓಂ ಸತ್ಪರಾಯಣಾಯ ನಮಃ ॥ 80 ॥

ಓಂ ಭಗವತೇ ನಮಃ ॥ 90 ॥

ಓಂ ಅದ್ಭುತಾನಂದಚರ್ಯಾಯ ನಮಃ ॥ 100 ॥

ಓಂ ಶ್ರೀಸಮರ್ಥಸದ್ಗುರುಸಾಯಿನಾಥಾಯ ನಮಃ ॥ 108 ॥

ನನಗೆ ತುಂಬಾ ಇಷ್ಟವಾದ ೪೦ ಕನ್ನಡ ಚಿತ್ರ ಗೀತೆಗಳು

10:41 AM

ನನಗೆ ತುಂಬಾ ಇಷ್ಟವಾದ ೪೦ ಕನ್ನಡ ಚಿತ್ರ ಗೀತೆಗಳು

 1.ಯಾವ  ಮೋಹನ  ಮುರಳಿ ಕರೆಯಿತು  ( ಅಡಿಗರು  - ರಾಜು  ಅನಂತ ಸ್ವಾಮಿ  ,ಸಂಗೀತ  ಕಟ್ಟಿ  - ಮನು ಮೂರ್ತಿ )

2. ಮನಸೇ  ಬದುಕು  ನಿನಗಾಗಿ  (ಕಲ್ಯಾಣ್  - ಎಸ್.ಪಿ. ಬಿ  - ದೇವಾ)

3. ನಗುವ  ನಯನ  ಮಧುರ  ಮೌನ  -(ಆರ್ ಏನ್ ಜಯಗೋಪಾಲ್  - ಎಸ್ ಜಾನಕಿ  , ಎಸ್.ಪಿ. ಬಿ  - ಇಳಿಯರಾಜ )

4. ಜೊತೆಯಲಿ  ಜೊತೆ  ಜೊತೆಯಲಿ  - (ಚಿ. ಉದಯಶಂಕರ್ - ಎಸ್ ಜಾನಕಿ  , ಎಸ್.ಪಿ. ಬಿ  - ಇಳಿಯರಾಜ )


ಕ್ಷಣ ಕ್ಷಣ ಕಳೆಯುತಿರಲು

11:19 AM

ಕ್ಷಣ ಕ್ಷಣ ಕಳೆಯುತಿರಲು

ಕ್ಷಣ  ಕ್ಷಣ  ಕಳೆಯುತಿರಲು 

ಇನ್ಯಾರಿಗೋಸ್ಕರ  ಎಂಬ  ಈ  ಜೀವವು,

ಹಸುಗೂಸೊಂದು ಕರೆಯಲು  ನನ್ನ  

ಅವಳೇ  ಉಳಿದ  ಬದುಕಿನ  ನಿಮಿತ್ತವು.

ಕಾಣದ  ಕತ್ತಲಲ್ಲಿ  ದೀಪವಾಗಿ  ಬಂದೆ 

ಅಲೆಗಳಿಂದ  ತತ್ತರಿಸಿದ  ಜೀವಕೆ  ದಡವಾಗಿ  ಬಂದೆ 

ಪ್ರೀತಿಯ  ಹಾತೊರಿದ  ಮನಸ್ಸಿಗೆ  ಜೇನಾಗಿ  ಬಂದೆ 

ಕಾಣದ  ದಾರಿಗೆ  ಅಕ್ಷಿಯಾಗಿ  ಬಂದೆ .

ನಿನ್ನ  ನಗುವಲ್ಲಿ  ಜೀವನದ  ಅರ್ಥವ  ಕಂಡೆ 

ನಿನ್ನ  ನಡೆಯಲಿ  ಮುಂದಿನ  ಪುಟಗಳ  ಕಂಡೆ 

ನಿನ್ನ  ಹಟದಲಿ ನನಗರಿಯದ  ತಾಳ್ಮೆಯ  ಕಂಡೆ 

ನೀನಿರದ  ಕ್ಷಣದಲಿ  ನಿನ್ನ  ನೆನಪಲ್ಲೆ ಮುಳುಗಿದ  ತಂದೆಯ  ಕಂಡೆ 

ನಿನ್ನ  ಸ್ಪರ್ಶದಲಿ  ನನ್ನ  ಮುಗ್ಧತೆಯ  ಕಂಡೆ 

ನಿನ್ನ  ಜೋಗುಳದಲಿ  ನನ್ನ  ಸ್ವರಗಳ  ಕಂಡೆ 

ನಿನ್ನ  ತುಟಿಯಲಿ  ಮಾತುಗಳ  ಮುತ್ತುಗಳನು  ಕಂಡೆ 


ಅವಳು ತಿಳಿದಂತೆ ನಾನು

11:28 AM

ಅವಳು ತಿಳಿದಂತೆ ನಾನು

 ಈ ಕಥೆ ಬರೆದಿದ್ದು ನನ್ನ ಹುಬ್ಬಳ್ಳಿ ಧಾರವಾಡದ ಸಮಯದಲ್ಲಿ. ನನ್ನ ಬರವಣಿಗೆ ಆ ದಿನದ ನನ್ನ ಯೋಚನಾ ಲಹರಿಯ ಪ್ರೌಢಿಮೆ ಹೇಗಿತ್ತೋ ಹಾಗೆ ಕಥೆಯನ್ನು ಪೋಣಿಸಿದ್ದೆ. ಅದರಲ್ಲಿ ಬರುವ ಕಥಾ ಸನ್ನಿವೇಶ ಪಾತ್ರಗಳನ್ನು ನಿಜವಾದ ಪಾತ್ರಗಳ ಜೊತೆ ಜೋಡಿಸಿದ್ದೆ. ಇದು ಕಾಲ್ಪನಿಕ ಅಂತ ಮಾತ್ರ ಹೇಳಬಲ್ಲೆ. ಈ ಕಥಾ ನಾಯಕ ನಾಯಕನೇ ಅಲ್ಲ. ಅವನೊಂದು ಕಲ್ಪನೆ. ಅವನೊಂದು ಸ್ನೇಹ. ಅವನೊಂದು ಪ್ರೀತಿ. ಅವನೊಂದು ನಿರ್ಲ್ಯಕ್ಷ್ಯ, ಅವನೊಂದು ಅಂಜುಬುರುಕ, ಅವನೊಬ್ಬ ಹಠಮಾರಿ, ಅವನೊಬ್ಬ ಸಮಯ ತನ್ನೊಂದಿಗಿದೆ ಎಂದು ತಿಳಿದಿರುವ ಮೂರ್ಖ, ಇನ್ನೂ ಹಲವಾರು. ಓದಿ ನೀವೇ ಹೇಳಿ ಅವನೇನೆಂದು.

ಹುಬ್ಬಳ್ಳಿಯ ಜನಜಂಗುಳಿ ಇರುವ ಸ್ಥಳ ಅದು. ರೈಲ್ವೆ ನಿಲ್ದಾಣದ ಮುಂದಿನ ರಸ್ತೆ. ಅಲ್ಲೇ ಹತ್ತಿರ ಇರುವ ಮಿಶ್ರ ಚಾಟ್ ಅಲ್ಲಿ ನನ್ನ ಸ್ನೇಹಿತನ ಜೊತೆ ಕಚೋರಿ ತಿಂದು ಮುಗಿಸಿದ್ದೆ. ಧಾರವಾಡಕ್ಕೆ ಹೋಗುವ ಕೊನೆಯ ಬೇಂದ್ರೆ ಬಸ್ ಹತ್ತಿದೆ. ಇನ್ನೂ ರಾಣಿ ಚನ್ನಮ್ಮದಿಂದ ಬರುವ ಪ್ರಯಾಣಿಕರಿಗೆ ಬಸ್ ಕಾಯುತ್ತಾ ಇತ್ತು. ನಾನೋ ಕಿಡಕಿಯಿಂದ ಹೊರಗಡೆ ನೋಡೋದು , ನನ್ನ ಟಾಟಾ ಇಂಡಿಕಾಂ ಮೊಬೈಲ್ನಲ್ಲಿ ಸಮಯ ಎಷ್ಟಾಗಿದೆ ಎಂದು ನೋಡೋದು. ಹೀಗೆ ನೋಡುತ್ತಾ ನೋಡುತ್ತಾ ಏನೋ ಶಬ್ದ. ಏನಾಯ್ತು ಅಂತ ನೋಡಿದರೆ ಯಾರೋ ಹುಡುಗಿ ತನ್ನ ಬ್ಯಾಗನ್ನು ಮೇಲೆ ಬಸ್ಸಲ್ಲಿ ಎತ್ತಿ ಇಡಲು ತಡವರಿಸುತ್ತಿದ್ದಳು. ನಾನೋ ಹೋಗಿ ಬ್ಯಾಗ್ ಎತ್ತಿ ಮುಂದಿನ ಸೀಟ್ ಹತ್ತಿರ ಇಟ್ಟೆ. ಹಾಗೆ ಹುಡುಗಿ ನನ್ನ ನೋಡಿ ಸಿಹಿಯಾದ ಧ್ವನಿಯಲ್ಲಿ ಥ್ಯಾಂಕ್ಸ್ ಹೇಳಿದಾಗ ನಾನು ಅವಳ ಸುಂದರ ಕಣ್ಣ ಒಮ್ಮೆ ನೋಡಿದೆ.ನೋಡುತ್ತಾನೇ ಇರಬೇಕು ಅನ್ನುವಷ್ಟು ಸುಂದರ ಕಣ್ಣುಗಳು. ಏನು ಹೇಳ್ಬೇಕೋ ಅನ್ನುವಷ್ಟು ತಿಳಿಯದೆ ಪರವಾಗಿಲ್ಲ ಅಂತ ಮಾತ್ರ ಹೇಳಿದೆ. 


ಅಮ್ಮ

1:04 PM

ಅಮ್ಮ

 ಅಮ್ಮ ಎನ್ನುವ ಆ ಹೆಸರಲ್ಲಿ ಏನಿದೆಯೋ ?

ಪ್ರೀತಿ ಎಂಬ ಕಡಲಲಿ

10:38 AM

ಪ್ರೀತಿ ಎಂಬ ಕಡಲಲಿ

ಪ್ರೀತಿ  ಎಂಬ  ಕಡಲಲಿ

ಬರುವೆನಲ್ಲಾ  ದಡಕ್ಕೆ 

ಈಜಿ  ಈಜಿ ಹೋದರೆ

ಆಳಕ್ಕೆ ಕರೆದುಕೊಳ್ಳುತ್ತಿರುವುದು  ಏನು ?

ಬೂದಿಯೋ  ಚೂರೋ  ಏನೆಂದು ಕಾಣೆ.

ಜಾತಿ  ಎಂಬ  ವಿಷದಲ್ಲಿ

ಧರ್ಮವೆಂಬ  ಕಳೆದು  ಹೋದ  ದಾರಿಯಲಿ,

ನನ್ನ  ಕುರುಡು  ಮಾಡಿಸಿತು ?

ನಿನ್ನ  ಕೋಪದಲ್ಲಿ

ನಿನ್ನ ಪ್ರೀತಿಯಲ್ಲಿ 

ಎಷ್ಟು ಆಳವೆಂದು  ತಿಳಿಯಲು,

ಸುಳಿಯಲ್ಲಿ ಸಿಕ್ಕಿರುವ  ಕಾಲು.

ನನ್ನ ನಾ ಕಂಡುಕೊಂಡ  ಬಗೆ,

ಬೆಚ್ಚಿ  ಬೀಳಿಸುವ  ಕಥೆ,

ದಡಕ್ಕೆ ಸೇರಿದ್ದೇ ಒಂದು ಸಾಹಸಗಾಥೆ. 

ನುಚ್ಚು ನೂರಾದ ಕನಸ್ಸೇ ಒಂದು ಜೀವನಗಾಥೆ.  

ಪತ್ನಿಯ ನೆನಪಲ್ಲಿ

12:09 AM

ಪತ್ನಿಯ ನೆನಪಲ್ಲಿ